೧."ಚದುರಂಗ"
"ಆಟದ ಚದುರಂಗ
ಯುದ್ಧದ ರಣರಂಗ
ಗೆದ್ದವ ನಿಜ ರಂಗ
ಸೋತವ ಬರಿ ಪೆಂಗ!"
೨."ರಾಜಕಾರಣಿ"
ರಾಜ್ಯಾಧಿಕಾರಕ್ಕಾಗಿ ಗೆಲ್ಲುತ್ತಾನೆ "ಜನಮನ"
ಜಯಗಳಿಸಲು ಮಾಡುತ್ತಾನೆ "ನಮನ"
ಗೆದ್ದಮೇಲೆ ಅಭಿವೃದ್ಧಿಗೆ ಒಪ್ಪುವುದಿಲ್ಲ ಅವನ "ಮನ"
ಯಾರೇನೇ ಕೇಳಿದರೂ ಅವನ ಉತ್ತರ "ನ".....!!
೩.ಗೆದ್ದರೆ "ಟೀ ಪಾರ್ಟಿ"...
ಸೋತರೆ "ಆಂಟೀ ಪಾರ್ಟಿ"....!!
೪."ಮಾತು"
ತಪ್ಪಬಾರದು ಮಾತಿನ ಟ್ರ್ಯಾಕ್ಕು
ತಪ್ಪಿದರೆಆಗುವುದು ಮನಸ್ಸಿಗೆ ಕ್ರ್ಯಾಕ್ಕು..(ನೋವು)
ಇರಬೇಕು ನುಡಿಯಲ್ಲಿ,ನಡೆಯಲ್ಲಿ ಬ್ರೇಕು
ಬಾಯಿಗೆ ಸಿಕ್ಕದೇ ಬದುಕಬೇಕು...
೫."ಮದುವೆ"
ಬೇಕೆಂದು ಬಯಸುತ್ತಾರೆ ಮನದಲ್ಲಿ
ಯಾಕೆಂದು ಬೆಳೆಸುತ್ತಾರೆ ಮಾತಿನಲ್ಲಿ..!
ಆಗದಿರೆ ಇದ್ದಂತೆ ಕೋತಿ ವನದಲ್ಲಿ..
ಆಗುವಿರೆ..ಬಿದ್ದಂತೆ ಭೀತಿ ಮನೆಯಲ್ಲಿ...!!
೬."ರಸ್ತೆ"
ಕಾಸರಗೋಡು ಮಂಗಳೂರು ರೋಡು
ರೋಡಲ್ಲ ಮಳೆಗಾಲದ ತೋಡು...!
ಪಯಣಿಸಿ ಉಳಿದವಗೆ ಬೇಕು ಪಂಚಕರ್ಮ
ಸ್ವರ್ಗಕ್ಕೆ ತಲುಪಿದರೆ ಷಟ್ಕರ್ಮ...!!(ಬೊಜ್ಜ)
೭."ಮದುವೆ"
ಮದುವೆ ಬೇಡವಂತೆ ನಮ್ಮ ಗಂಡಿಗೆ
ಆದರೂ ತಾಳಿ,,! ಕಟ್ಟುವ "ಗುಂಡಿ"ಗೆ (ಗುಂಡ,ಗುಂಡಿ)
ಸಂಭಾಳಿಸಲು ಇರಬೇಕು ಗಟ್ಟಿ ಗುಂಡಿಗೆ
ತಾಳ್ಮೆ ಇದ್ದರೆ ಬೀಳಲಾರಿರಿ ಗುಂಡಿಗೆ..!!
೮."ನನ್ನ ಸಹನೆ"
ಬೇಸರಿಸದಿರಿ ಸುಮ್ಮನೆ ಮಾಡಿದಿರೆಂದು ಕಟಕಿ..
ಹಾರಿಹೋಯಿತೆಲ್ಲೋ..ಅದು... ನನ್ನ ಹೃದಯವೊಂದು ಕಿಟಕಿ..!
ನಷ್ಟವಿದ್ದರೂ ಸುಡುವುದಿಲ್ಲವೆ ಖುಷಿಗೆಂದು ಪಟಾಕಿ..
ಲಾಭವಿದ್ದರೆ ಮಾಡಿ(ಮಾಡಲಿ)ಬಿಡಿ ಈ ರೀತಿ ಚಟಾಕಿ....!!
೯."ಸೈನಿಕ"
ಕೃತಜ್ಞತೆ ಇರಲಿ ನಿಮ್ಮ ಜೀವನದಿ ದಾಟಿಸುವ ಅಂಬಿಗರಿಗೆ...
ಕೊಡುವುದಿಲ್ಲ ನಾವೇನು ಆ ಶೌರ್ಯ ಸಾಮರ್ಥ್ಯಗಳ ಬೀಗರಿಗೆ..!
ಹೊಟ್ಟೆಪಾಡಿಗಾಗಿ ತಮ್ಮ ಶೌರ್ಯ ಪದಕಗಳ ಇಡುವರು ಬಿಕರಿಗೆ...
ಕೇಳಿಕೊಳ್ಳಿ ಆತ್ಮಸಾಕ್ಷಿಯ ಇದು ಶೋಭೆಯೇ ಭಾರತ ಸಭಿಕರಿಗೆ...?!!
೧೦."ನಿತ್ಯ ಸುದ್ದಿ"
ಪರಿಣಾಮ ಬೀರದು ಅಜಗಳ ಜಗಳ
ಲೋಕ ಅಲ್ಲೋಲ ಕಲ್ಲೋಲ ಕೋಪಕ್ಕೆ ಗಜಗಳ
ನಿತ್ಯ ಕಲಹಕ್ಕೆ ಕೊನೆಯಿಲ್ಲ ಪ್ರಜೆಗಳ
ಸ್ಫೋಟ,ಕೊಲೆ ನಿತ್ಯವಾದರೆ ಅಗತ್ಯವೇ ರಜೆಗಳ?
೧೧."ಆಹಾರ"
ಒಮ್ಮೆ ಉಂಡವ ಯೋಗಿ.!
ಎರಡು ಬಾರಿ ಉಂಡವ ಭೋಗಿ..!!
ಮೂರು ಬಾರಿ ಉಂಡವ ರೋಗಿ..!!!
ನಾಲ್ಕು ಬಾರಿ ಉಂಡವನನ್ನು ಹೊತ್ಕೊಂಡ್ (ಚಿತೆಗೆ) ಹೋಗಿ...!!!!
೧೨."ಛಲ"
ಕಟ್ಟುವಿರೆ ನಾಡನ್ನು ಹೆಕ್ಕಿ ಈ ಜಗ..
ಕಟ್ಟುವುದು ಗೂಡನ್ನು ಹಕ್ಕಿ ಗೀಜಗ..!
ನಿಲ್ದಾಣ ಕ್ಷೇಮ ಸರಿ ವಿಮಾನಕ್ಕೆ..
ಹಾರದಿದ್ದರೆ ಕ್ಷೋಭೆಯಲ್ಲವೆ ಮಾನಕ್ಕೆ...!!
೧೩."ರಸ್ತೆ"
ಹಾಳಾಗಿ ಹೇಗಿದೆ..ನಮ್ಮ ರಸ್ತೆ..?
ಹೋಳಾಗಿ ಹೋಗಿದೆ ಇದು ದುರವಸ್ಥೆ...!
ಹೊಂಡದಲ್ಲಿ ಬಿದ್ದಾಗ ಸರಕಾರಿ ರಸ್ತೆ ಸಾರಿಗೆ..
ತುಂಡಾಗಿ ಬಿದ್ದಂತೆ ತರಕಾರಿ ಚಪ್ಪೆ ಸಾರಿಗೆ....!!
೧೪."ನನ್ನ ಅಭಿರುಚಿ"
ಗಣಕ ಯಂತ್ರ ಸಾಕು ಬುದ್ಧಿವಂತರ ಮಟ್ಟಿಗೆ
ಅಣಕದಂತಿದ್ದರೂ ಬೇಕು ಮೂರ್ಖರ ಪೆಟ್ಟಿಗೆ....!
ಆಡಲು ಚದುರಂಗ ಬುದ್ಧಿಯ ಕಟ್ ನಿಟ್ಟಿಗೆ
ನೋಡಲು ಚಂದ ತಿಳಿಗೇಡಿ ಕ್ರಿಕೆಟ್ ಒಟ್ಟಿಗೆ..!!
೧೫. "ತಿಳುವಳಿಕೆ"
ತಿಳಿದುಕೊಳ್ಳದಿರಿ ಲೋಕವ ಅರ್ಧಂಬರ್ಧ,
ಹಳಿದು ಕಳೆಯದಿರಿ ವಾಕ್ಯವ ಅಸಂಬದ್ಧ,
ಉಳಿದರೆ ಬೆಳೆಯುವಿರಿ ಜನಕೆ ಬದ್ಧ,
ಬೆಳೆದರೆ ಹೊಳೆಯುವಿರಿ ದಿನಕೆ ಪ್ರಬುದ್ಧ..!
೧೬."ಚುಟುಕ"
ಪರಿಸರಕ್ಕನುಸರಿಸಿ ಹೊಳೆವುದೊಮ್ಮೆ ಚುಟುಕ
ಕರಕರೆ ಮಾತಿಗೆ ಥಟ್ಟನೇ ಒಂದು ಮೊಟಕ..!
ಸರಿಯಾಗದೆಂದು ಅರಿತಾಗ ಕುಟುಕು..
ಪರಿಪೂರ್ಣ ಕೆಲಸಕ್ಕೆ ಜೀವಜಲ ಗುಟುಕು..
೧೭."ಜನ್ಮ ಭೂಮಿ"
ತಿನ್ನದೇ ಸಾಧ್ಯವೆ ತಾಯಿ ನಿನಗಿವರ ಜೀರ್ಣಿಸಲು..?
ನಿನ್ನ ಸಹನೆಯನು ನಾ ಸೋತೆ ವರ್ಣಿಸಲು..
ಜನ್ಮಭೂಮಿಯೆ ಕೊಡುಶಕ್ತಿ ಕೃತಘ್ನರ ನಾಶಕ್ಕೆ ಗುಣಿಸಲು...
ಪನ್ನಗದ ವಿಷ ಕಡಿಮೆಯಾಗುವುದೆ ಹಾಲುಣಿಸಲು..?
೧೮."ವ್ಯಕ್ತಿತ್ವ"
ದ್ವೇಷಾಗ್ನಿಗೆ ದೂಡಬೇಡ ಚಾಡಿಯ ಕಟ್ಟಿಗೆ..
ವಶಬೀಳುವೆ ಒಂದೊಮ್ಮೆ ನೀ ಇಕ್ಕಟ್ಟಿಗೆ..
ಕಟ್ಟು ಪರಸ್ಪರರಲ್ಲಿ ನಂಬಿಕೆಯ ಇಟ್ಟಿಗೆ..
ಒಟ್ಟು ತುಂಬುವುದು ನಿನ್ನ ಪುಣ್ಯದ ಪೆಟ್ಟಿಗೆ..
೧೯."ಕೋಪ-ತಾಪ"
ಹೆಚ್ಚಾಗಿ ತಾಪ ಹೋಯಿತು ಸುಟ್ಟು ಬೀರಿತು ಬೆಳಕು ನಾರಿತು ಹೊಗೆ ಉಳಿಸಿತು ಬೂದಿ
ಹುಚ್ಚಾದ ಕೋಪ ಆಯಿತು ಸಿಟ್ಟು ಸೋರಿತು ಹುಳುಕು ಕಾರಿತು ಹಗೆ ಉಳಿಸಿತು ಬೇಗುದಿ..
೨೦."ಭಿನ್ನರುಚಿ"
ಅಮ್ಮ ಯಕ್ಷಗಾನಕ್ಕೆ ಬದ್ಧ
ನಮ್ಮ ಇಷ್ಟ ಸಿನೆಮಕ್ಕೆ ಶುದ್ಧ..!
ಸಾಕು, ಬೇಡವೆಂದು ಒಮ್ಮೊಮ್ಮೆ ವಿರುದ್ಧ..
ಬೇಕು ಬಿಡೆಯೆಂದು ಸುಮ್ಮನೇ ಯುದ್ಧ..!!
"ಆಟದ ಚದುರಂಗ
ಯುದ್ಧದ ರಣರಂಗ
ಗೆದ್ದವ ನಿಜ ರಂಗ
ಸೋತವ ಬರಿ ಪೆಂಗ!"
೨."ರಾಜಕಾರಣಿ"
ರಾಜ್ಯಾಧಿಕಾರಕ್ಕಾಗಿ ಗೆಲ್ಲುತ್ತಾನೆ "ಜನಮನ"
ಜಯಗಳಿಸಲು ಮಾಡುತ್ತಾನೆ "ನಮನ"
ಗೆದ್ದಮೇಲೆ ಅಭಿವೃದ್ಧಿಗೆ ಒಪ್ಪುವುದಿಲ್ಲ ಅವನ "ಮನ"
ಯಾರೇನೇ ಕೇಳಿದರೂ ಅವನ ಉತ್ತರ "ನ".....!!
೩.ಗೆದ್ದರೆ "ಟೀ ಪಾರ್ಟಿ"...
ಸೋತರೆ "ಆಂಟೀ ಪಾರ್ಟಿ"....!!
೪."ಮಾತು"
ತಪ್ಪಬಾರದು ಮಾತಿನ ಟ್ರ್ಯಾಕ್ಕು
ತಪ್ಪಿದರೆಆಗುವುದು ಮನಸ್ಸಿಗೆ ಕ್ರ್ಯಾಕ್ಕು..(ನೋವು)
ಇರಬೇಕು ನುಡಿಯಲ್ಲಿ,ನಡೆಯಲ್ಲಿ ಬ್ರೇಕು
ಬಾಯಿಗೆ ಸಿಕ್ಕದೇ ಬದುಕಬೇಕು...
೫."ಮದುವೆ"
ಬೇಕೆಂದು ಬಯಸುತ್ತಾರೆ ಮನದಲ್ಲಿ
ಯಾಕೆಂದು ಬೆಳೆಸುತ್ತಾರೆ ಮಾತಿನಲ್ಲಿ..!
ಆಗದಿರೆ ಇದ್ದಂತೆ ಕೋತಿ ವನದಲ್ಲಿ..
ಆಗುವಿರೆ..ಬಿದ್ದಂತೆ ಭೀತಿ ಮನೆಯಲ್ಲಿ...!!
೬."ರಸ್ತೆ"
ಕಾಸರಗೋಡು ಮಂಗಳೂರು ರೋಡು
ರೋಡಲ್ಲ ಮಳೆಗಾಲದ ತೋಡು...!
ಪಯಣಿಸಿ ಉಳಿದವಗೆ ಬೇಕು ಪಂಚಕರ್ಮ
ಸ್ವರ್ಗಕ್ಕೆ ತಲುಪಿದರೆ ಷಟ್ಕರ್ಮ...!!(ಬೊಜ್ಜ)
೭."ಮದುವೆ"
ಮದುವೆ ಬೇಡವಂತೆ ನಮ್ಮ ಗಂಡಿಗೆ
ಆದರೂ ತಾಳಿ,,! ಕಟ್ಟುವ "ಗುಂಡಿ"ಗೆ (ಗುಂಡ,ಗುಂಡಿ)
ಸಂಭಾಳಿಸಲು ಇರಬೇಕು ಗಟ್ಟಿ ಗುಂಡಿಗೆ
ತಾಳ್ಮೆ ಇದ್ದರೆ ಬೀಳಲಾರಿರಿ ಗುಂಡಿಗೆ..!!
೮."ನನ್ನ ಸಹನೆ"
ಬೇಸರಿಸದಿರಿ ಸುಮ್ಮನೆ ಮಾಡಿದಿರೆಂದು ಕಟಕಿ..
ಹಾರಿಹೋಯಿತೆಲ್ಲೋ..ಅದು... ನನ್ನ ಹೃದಯವೊಂದು ಕಿಟಕಿ..!
ನಷ್ಟವಿದ್ದರೂ ಸುಡುವುದಿಲ್ಲವೆ ಖುಷಿಗೆಂದು ಪಟಾಕಿ..
ಲಾಭವಿದ್ದರೆ ಮಾಡಿ(ಮಾಡಲಿ)ಬಿಡಿ ಈ ರೀತಿ ಚಟಾಕಿ....!!
೯."ಸೈನಿಕ"
ಕೃತಜ್ಞತೆ ಇರಲಿ ನಿಮ್ಮ ಜೀವನದಿ ದಾಟಿಸುವ ಅಂಬಿಗರಿಗೆ...
ಕೊಡುವುದಿಲ್ಲ ನಾವೇನು ಆ ಶೌರ್ಯ ಸಾಮರ್ಥ್ಯಗಳ ಬೀಗರಿಗೆ..!
ಹೊಟ್ಟೆಪಾಡಿಗಾಗಿ ತಮ್ಮ ಶೌರ್ಯ ಪದಕಗಳ ಇಡುವರು ಬಿಕರಿಗೆ...
ಕೇಳಿಕೊಳ್ಳಿ ಆತ್ಮಸಾಕ್ಷಿಯ ಇದು ಶೋಭೆಯೇ ಭಾರತ ಸಭಿಕರಿಗೆ...?!!
೧೦."ನಿತ್ಯ ಸುದ್ದಿ"
ಪರಿಣಾಮ ಬೀರದು ಅಜಗಳ ಜಗಳ
ಲೋಕ ಅಲ್ಲೋಲ ಕಲ್ಲೋಲ ಕೋಪಕ್ಕೆ ಗಜಗಳ
ನಿತ್ಯ ಕಲಹಕ್ಕೆ ಕೊನೆಯಿಲ್ಲ ಪ್ರಜೆಗಳ
ಸ್ಫೋಟ,ಕೊಲೆ ನಿತ್ಯವಾದರೆ ಅಗತ್ಯವೇ ರಜೆಗಳ?
೧೧."ಆಹಾರ"
ಒಮ್ಮೆ ಉಂಡವ ಯೋಗಿ.!
ಎರಡು ಬಾರಿ ಉಂಡವ ಭೋಗಿ..!!
ಮೂರು ಬಾರಿ ಉಂಡವ ರೋಗಿ..!!!
ನಾಲ್ಕು ಬಾರಿ ಉಂಡವನನ್ನು ಹೊತ್ಕೊಂಡ್ (ಚಿತೆಗೆ) ಹೋಗಿ...!!!!
೧೨."ಛಲ"
ಕಟ್ಟುವಿರೆ ನಾಡನ್ನು ಹೆಕ್ಕಿ ಈ ಜಗ..
ಕಟ್ಟುವುದು ಗೂಡನ್ನು ಹಕ್ಕಿ ಗೀಜಗ..!
ನಿಲ್ದಾಣ ಕ್ಷೇಮ ಸರಿ ವಿಮಾನಕ್ಕೆ..
ಹಾರದಿದ್ದರೆ ಕ್ಷೋಭೆಯಲ್ಲವೆ ಮಾನಕ್ಕೆ...!!
೧೩."ರಸ್ತೆ"
ಹಾಳಾಗಿ ಹೇಗಿದೆ..ನಮ್ಮ ರಸ್ತೆ..?
ಹೋಳಾಗಿ ಹೋಗಿದೆ ಇದು ದುರವಸ್ಥೆ...!
ಹೊಂಡದಲ್ಲಿ ಬಿದ್ದಾಗ ಸರಕಾರಿ ರಸ್ತೆ ಸಾರಿಗೆ..
ತುಂಡಾಗಿ ಬಿದ್ದಂತೆ ತರಕಾರಿ ಚಪ್ಪೆ ಸಾರಿಗೆ....!!
೧೪."ನನ್ನ ಅಭಿರುಚಿ"
ಗಣಕ ಯಂತ್ರ ಸಾಕು ಬುದ್ಧಿವಂತರ ಮಟ್ಟಿಗೆ
ಅಣಕದಂತಿದ್ದರೂ ಬೇಕು ಮೂರ್ಖರ ಪೆಟ್ಟಿಗೆ....!
ಆಡಲು ಚದುರಂಗ ಬುದ್ಧಿಯ ಕಟ್ ನಿಟ್ಟಿಗೆ
ನೋಡಲು ಚಂದ ತಿಳಿಗೇಡಿ ಕ್ರಿಕೆಟ್ ಒಟ್ಟಿಗೆ..!!
೧೫. "ತಿಳುವಳಿಕೆ"
ತಿಳಿದುಕೊಳ್ಳದಿರಿ ಲೋಕವ ಅರ್ಧಂಬರ್ಧ,
ಹಳಿದು ಕಳೆಯದಿರಿ ವಾಕ್ಯವ ಅಸಂಬದ್ಧ,
ಉಳಿದರೆ ಬೆಳೆಯುವಿರಿ ಜನಕೆ ಬದ್ಧ,
ಬೆಳೆದರೆ ಹೊಳೆಯುವಿರಿ ದಿನಕೆ ಪ್ರಬುದ್ಧ..!
೧೬."ಚುಟುಕ"
ಪರಿಸರಕ್ಕನುಸರಿಸಿ ಹೊಳೆವುದೊಮ್ಮೆ ಚುಟುಕ
ಕರಕರೆ ಮಾತಿಗೆ ಥಟ್ಟನೇ ಒಂದು ಮೊಟಕ..!
ಸರಿಯಾಗದೆಂದು ಅರಿತಾಗ ಕುಟುಕು..
ಪರಿಪೂರ್ಣ ಕೆಲಸಕ್ಕೆ ಜೀವಜಲ ಗುಟುಕು..
೧೭."ಜನ್ಮ ಭೂಮಿ"
ತಿನ್ನದೇ ಸಾಧ್ಯವೆ ತಾಯಿ ನಿನಗಿವರ ಜೀರ್ಣಿಸಲು..?
ನಿನ್ನ ಸಹನೆಯನು ನಾ ಸೋತೆ ವರ್ಣಿಸಲು..
ಜನ್ಮಭೂಮಿಯೆ ಕೊಡುಶಕ್ತಿ ಕೃತಘ್ನರ ನಾಶಕ್ಕೆ ಗುಣಿಸಲು...
ಪನ್ನಗದ ವಿಷ ಕಡಿಮೆಯಾಗುವುದೆ ಹಾಲುಣಿಸಲು..?
೧೮."ವ್ಯಕ್ತಿತ್ವ"
ದ್ವೇಷಾಗ್ನಿಗೆ ದೂಡಬೇಡ ಚಾಡಿಯ ಕಟ್ಟಿಗೆ..
ವಶಬೀಳುವೆ ಒಂದೊಮ್ಮೆ ನೀ ಇಕ್ಕಟ್ಟಿಗೆ..
ಕಟ್ಟು ಪರಸ್ಪರರಲ್ಲಿ ನಂಬಿಕೆಯ ಇಟ್ಟಿಗೆ..
ಒಟ್ಟು ತುಂಬುವುದು ನಿನ್ನ ಪುಣ್ಯದ ಪೆಟ್ಟಿಗೆ..
೧೯."ಕೋಪ-ತಾಪ"
ಹೆಚ್ಚಾಗಿ ತಾಪ ಹೋಯಿತು ಸುಟ್ಟು ಬೀರಿತು ಬೆಳಕು ನಾರಿತು ಹೊಗೆ ಉಳಿಸಿತು ಬೂದಿ
ಹುಚ್ಚಾದ ಕೋಪ ಆಯಿತು ಸಿಟ್ಟು ಸೋರಿತು ಹುಳುಕು ಕಾರಿತು ಹಗೆ ಉಳಿಸಿತು ಬೇಗುದಿ..
೨೦."ಭಿನ್ನರುಚಿ"
ಅಮ್ಮ ಯಕ್ಷಗಾನಕ್ಕೆ ಬದ್ಧ
ನಮ್ಮ ಇಷ್ಟ ಸಿನೆಮಕ್ಕೆ ಶುದ್ಧ..!
ಸಾಕು, ಬೇಡವೆಂದು ಒಮ್ಮೊಮ್ಮೆ ವಿರುದ್ಧ..
ಬೇಕು ಬಿಡೆಯೆಂದು ಸುಮ್ಮನೇ ಯುದ್ಧ..!!
ಕಡುಮನೆ ರವಿ ಯವರು ಸಾಹಿತ್ಯ, ಧಾರ್ಮಿಕ/ಪೌರೋಹಿತ್ಯ, ಕೃಷಿ ಮುಂತಾದ ಕ್ಷೇತ್ರಗಳಲ್ಲಿ ಪಳಗಿದವರು. ಅವರು ಚುಟುಕ, ಶುಭಾಶಿತಗಳನ್ನ ಬದುಕಿನ ಕನ್ನಡಿಯಂತೆ, ಚೆನ್ನಾಗಿ ಬರೆಯುತ್ತಾರೆ. ಅವರಿಗೆ ಹೃತ್ಪೂರ್ವಕ ಶುಭ ಹಾರೈಕೆಗಳು.
ReplyDelete