Tuesday, 17 January 2012

"ಸುಭಾಷಿತಗುಚ್ಛ-೨"


೬.ಧರ್ಮೋ ಯಶೋ ನಯೋ ದಾಕ್ಷ್ಯಂ ಮನೋಹಾರಿ ಸುಭಾಷಿತಂ|
ಇತ್ಯಾದಿ ಗುಣರತ್ನಾನಾಂ ಸಂಗ್ರಹೀ ನಾವಸೀದತಿ||
         ಧರ್ಮ,ಯಶಸ್ಸು,ವಿನಯ,ದಾಕ್ಷಿಣ್ಯ,ಮನೋಹರವಾದ ಸುಭಾಷಿತ
         ಇತ್ಯಾದಿಗಳನ್ನು ಸಂಗ್ರಹಿಸುವವನು(ಬಳಸುವವನು) ಎಂದಿಗೂ ದುಃಖಕ್ಕೊಳಗಾಗುವುದಿಲ್ಲ.


೭.ನಿದ್ರಾಂ ವಿದೂರಯಸಿ ಶಾಸ್ತ್ರರಸಂ ರುಣತ್ಸಿ
ಸರ್ವೇಂದ್ರಿಯಾರ್ಥಮಸಮರ್ಥ ವಿಧಿಂ ವಿಧತ್ಸೇ|
ಚೇತಶ್ಚ ವಿಭ್ರಮಯಸೇ ಕವಿತೇ ಪಿಶಾಚಿ
ಲೋಕಸ್ತಥಾಪಿ ಸುಕೃತೀ ತ್ವದನುಗ್ರಹೇಣ..||
        ನಿದ್ರಾಂ ವಿದೂರಯಸಿ=ಹೇ ಕವಿತೆಯೇ ನನ್ನ ನಿದ್ರೆಯನ್ನು ದೂರ ಮಾಡುವೆ..
        ಶಾಸ್ತ್ರರಸಂ ರುಣತ್ಸಿ=ಶಾಸ್ತ್ರಾಭಿರುಚಿಯನ್ನು ತಡೆಗಟ್ಟುವೆ..
        ಸರ್ವೇಂದ್ರಿಯಂ ಅಸಮರ್ಥಂ ಅರ್ಥಂ ವಿಧಿಂ ವಿಧತ್ಸೇ=
        ನನ್ನೆಲ್ಲಾ ಇಂದ್ರಿಯಗಳೂ ಅಸಮರ್ಥವಾಗುವಂತೆ ಮಾಡುತ್ತಿರುವೆ..
        ಚೇತಶ್ಚ ವಿಭ್ರಮಯಸೇ=ಬುದ್ಧಿ ಭ್ರಮೆಗೊಳ್ಳುವಂತೆ ಮಾಡುತ್ತಿರುವೆ..
        ತಥಾಪಿ ಪಿಶಾಚಿ ಕವಿತೇ=ಆದರೂ ಪಿಶಾಚಿ ಕವಿತೆಯೇ.
.        ತ್ವದನುಗ್ರಹೇಣ ಲೋಕಃ ಸುಕೃತೀ(ಭವತಿ)=ನಿನ್ನ ಅನುಗ್ರಹದಿಂದ
        ಲೋಕ ಧನ್ಯವಾಗಿದೆ...!!
ಹೇ ಕವಿತೆಯೇ ನನ್ನ ನಿದ್ರೆಯನ್ನು ದೂರ ಮಾಡುವೆ..ಶಾಸ್ತ್ರಾಭಿರುಚಿಯನ್ನು ತಡೆಗಟ್ಟುವೆ..ನನ್ನೆಲ್ಲಾ ಇಂದ್ರಿಯಗಳೂ ಅಸಮರ್ಥವಾಗುವಂತೆ ಮಾಡುತ್ತಿರುವೆ..ಬುದ್ಧಿ ಭ್ರಮೆಗೊಳ್ಳುವಂತೆ ಮಾಡುತ್ತಿರುವೆ..ಆದರೂ ಪಿಶಾಚಿ ಕವಿತೆಯೇ.ನಿನ್ನ ಅನುಗ್ರಹದಿಂದ ಲೋಕ ಧನ್ಯವಾಗಿದೆ...!!(ಇಲ್ಲಿ ಕವಿತೆಗಳನ್ನು ನಿಂದಾಸ್ತುತಿ ಮಾಡಲಾಗಿದೆ ಎಂದರೆ ಪ್ರತ್ಯಕ್ಷವಾಗಿ ನಿಂದಿಸಿ ಪರೋಕ್ಷವಾಗಿ ಹೊಗಳಲಾಗಿದೆ..)


೮.ಅನಿಚ್ಛಂತೋಪಿ ವಿನಯಂ ವಿದ್ಯಾಭ್ಯಾಸೇನ ಬಾಲಕಾಃ|
ಭೇಷಜೇನೇವ ನೈರುಜ್ಯಂ ಪ್ರಾಪಣೀಯಾಃ ಪ್ರಯತ್ನತಃ||-ಹರಿಹರ ಸುಭಾಷಿತ
        ಬಾಲಕಾಃ ಅನಿಚ್ಛಂತೋಪಿ= ಮಕ್ಕಳಿಗೆ ಇಷ್ಟವಿಲ್ಲದಿದ್ದರೂ
        ಭೇಷಜೇನ ಏವ ನೈರುಜ್ಯಂ=ಔಷಧವನ್ನು ಕೊಟ್ಟು ರೋಗ ಶಮನಗೊಳಿಸುವಂತೆ
        ಪ್ರಯತ್ನತಃ ವಿನಯಂ ವಿದ್ಯಾಭ್ಯಾಸೇನ ಪ್ರಾಪಣೀಯಾಃ=
        ಪ್ರಯತ್ನಪಟ್ಟು ವಿನಯ ಹಾಗೂ ವಿದ್ಯೆಗಳಿಂದ ಸಂಪನ್ನರಾಗಿಸಬೇಕು.
ಮಕ್ಕಳು ಬೇಸರಿಸುತ್ತಾರೆಂದು ಅವದನ್ನು ಮಿತಿಮೀರಿ ಮುದ್ದಿಸಿದರೆ ದೊಡ್ಡವರಾದ ನಂತರ ಅವರ ಗುಣ ಒಳ್ಳೆಯದಾಗದು. ಅವರಿಗೆ ಜೀವನ ನಡೆಸಲು ಕಷ್ಟವಾಗ ಬಹುದು ಆದ್ದರಿಂದ ಅವರನ್ನು ವಿದ್ಯಾ ವಿನಯ ಸಂಪನ್ನರಾಗಿಸಬೇಕೆಂಬುದು ಇದರ ಅರ್ಥ.


೯. ಈರ್ಷ್ಯೀ ಘೃಣೀತ್ವಸಂತುಷ್ಟಃ ಕ್ರೋಧನೋ ನಿತ್ಯ ಶಂಕಿತಃ|
ಪರ ಭಾಗ್ಯೋಪಜೀವೀ ಚ ಷಡೇತೇ ದುಃಖಭಾಗಿನಃ||-ಮಿತ್ರಭೇದ
  ಈರ್ಷ್ಯೀ=ಪರರ ಏಳಿಗೆಯನ್ನು ಕಂಡು ಅಸೂಯೆ ಪಡುವವನು,
        ಘೃಣೀ=ಅತಿಯಾದ ಕರುಣೆ ತೋರುವವನು,ಅಸಂತುಷ್ಟಃ=ಎಷ್ಟಿದ್ದರೂ ತೃಪ್ತಿಯಿಲ್ಲದವನು,
        ಕ್ರೋಧನಃ=ಕೋಪಿಯು,ನಿತ್ಯ ಶಂಕಿತಃ=ಯಾವಾಗಲೂ ಸಂಶಯಪಡುವವನು,
        ಹಾಗೂ ಪರ ಭಾಗ್ಯೋಪಜೀವೀ =ಪರಾವಲಂಬನೆಯಿಂದ ಜೀವಿಸುವವನು...
        ಈ ಆರು ವರ್ಗದ ಜನರು ನಿತ್ಯವೂ ದುಃಖಿಗಳಾಗುತ್ತಾರೆ.
ಪರರ ಏಳಿಗೆಯನ್ನು ಕಂಡು ಅಸೂಯೆ ಪಡುವವನು,ಅತಿಯಾದ ಕರುಣೆ ತೋರುವವನು,ಎಷ್ಟಿದ್ದರೂ ತೃಪ್ತಿಯಿಲ್ಲದವನು,ಕೋಪಿಯು,ಯಾವಾಗಲೂ ಸಂಶಯಪಡುವವನು,ಪರಾವಲಂಬನೆಯಿಂದ ಜೀವಿಸುವವನು...ಈ ಆರು ವರ್ಗದ ಜನರು ನಿತ್ಯವೂ ದುಃಖಿಗಳಾಗುತ್ತಾರೆ ಎಂದು ಸುಭಾಷಿತಕಾರನು ಹೇಳುತ್ತಾನೆ.ಇಲ್ಲಿ ನಮ್ಮಲ್ಲಿರಬಾರದ ಅಸಾಮರ್ಥ್ಯ ಹಾಗೂ ದುರ್ಗುಣಗಳನ್ನು ಹೇಳಲಾಗಿದೆ..


೧೦.ತದಾ ರಮ್ಯಾಣ್ಯರಮ್ಯಾಣಿ ಪ್ರಿಯಾಃ ಶಲ್ಯಂ ತದಾಸವಃ|
ತದೈಕಾಕೀ ಸ ಬಂಧುಃ ಸನ್ನಿಷ್ಟೇನ ರಹಿತೋ ಯದಾ||-ಕಿರಾತಾರ್ಜುನೀಯ
  ಯದಾ ಸನ್ನಿಷ್ಟೇನ ರಹಿತಃ=ನಮಗೆ ಬೇಕಾದ ವಸ್ತು(ವ್ಯಕ್ತಿ)ವಿಲ್ಲದಿದ್ದರೆ
        ರಮ್ಯಾಣಿ ಅರಮ್ಯಾಣಿ ತತ್=ಸುಂದರವಾದುದೂ ವಿಕಾರವಾಗಿ ಕಾಣುವುದು.
        ಪ್ರಿಯಾಃ ಆಸವಃ ಶಲ್ಯಂ ತತ್=ಪ್ರಿಯವಾದ ಪ್ರಾಣವೂ ಮುಳ್ಳಿನಂತಾಗುತ್ತದೆ.
        ಬಂಧುಃ ಸಃ ಏಕಾಕೀ ತತ್=ಬಂಧುಗಳಿದ್ದರೂ ಏಕಾಗಿಯಂತೆ ಬೇಸರವಾಗುತ್ತದೆ.
ನಮಗೆ ಬೇಕಾದ ವಸ್ತು(ವ್ಯಕ್ತಿ)ವಿಲ್ಲದಿದ್ದರೆ ಸುಂದರವಾದುದೂ ವಿಕಾರವಾಗಿ ಕಾಣುವುದು.ಪ್ರಿಯವಾದ ಪ್ರಾಣವೂ ಮುಳ್ಳಿನಂತಾಗುತ್ತದೆ.ಬಂಧುಗಳಿದ್ದರೂ ಏಕಾಗಿಯಂತೆ ಬೇಸರವಾಗುತ್ತದೆ

1 comment: