ಮಧುರವೆನ್ನುವರು ಪ್ರೀತಿ..
ಸುಂದರವೆನ್ನುವರೊಂದು ರೀತಿ..
ಮಾತನಾಡಲು ಮಾತ್ರ ಬಿಡದು ಭೀತಿ..
ಜೀವಿಸಲು ಬೇಕು..
ಭಾವನೆಗಳ ಶ್ವಾಸ...
ಆಗುವೆಯ ನನ್ನ ಪ್ರಾಣವಾಯು...?
ಸೇವಿಸಲು ಸಾಕು..
ನಿನ್ನ ವಿಶ್ವಾಸ....
ನೀಗುವೆಯ ಮುನ್ನ ಪ್ರಣಯ ಸಾವು...?
ತಡೆದು ನಿಲ್ಲಲೆ..?
ಭಾವನೆಗಳ ಅಣೆಕಟ್ಟು
ತನು ಭಾರವಾಗಿದೆ...
ಒಡೆದು ಚೆಲ್ಲಲೆ..?
ವೇದನೆಗೆ ಕಂಗೆಟ್ಟು..
ಮನ ಹಗುರವಾಗದೇ...?
ಹೇಳುವರು ನೀತಿ..ಪ್ರೇಮ
ಬರಿಯ ಬಂಧನವೆಂದು
ಅದು ಅವರ ವೈರಾಗ್ಯ..
ತಾಳುವೆನು ಪ್ರೀತಿ..ಸೌಮ್ಯ
ಸಿರಿಯ ಇಂಧನವೆಂದು
ಇದು ಅಮರ ಸೌಭಾಗ್ಯ..!
No comments:
Post a Comment