೧.ಘಟ್ಟನಂ ಪ್ರತಿಭಾ ಕೇಚಿತ್, ಕೇಚಿತ್ ಘಟ್ಟನಂ ನಿಸ್ಪೃಹಃ|
ಘಟದೀಪ ಪ್ರಭಾ ಕೇಚಿತ್, ಕೇಚಿದಾಕಾಶ ಸನ್ನಿಭಃ||
ಘಟ್ಟನಂ ಪ್ರತಿಭಾ ಕೇಚಿತ್=ಕೆಲವು ಜನರ ಪ್ರತಿಭೆ ಗೊತ್ತಾಗಬೇಕಾದರೆ ಸ್ವಲ್ಪ ಹೆಟ್ಟಬೇಕು (ಪ್ರೋತ್ಸಾಹಿಸಬೇಕು) ಹೇಳಿ...
ಕೇಚಿತ್ ಘಟ್ಟನಂ ನಿಸ್ಪೃಹಃ=ಕೆಲವರಿಗೆ ಹೆಟ್ಟುವುದೇ ವ್ಯರ್ಥ.ಎಷ್ಟು ಪ್ರೋತ್ಸಾಹಿಸಿಯೂ ಪ್ರಯೋಜನ ಇಲ್ಲ.
ಘಟದೀಪ ಪ್ರಭಾ ಕೇಚಿತ್=ಇನ್ನು ಕೆಲವರಿಗೆ ಪ್ರತಿಭೆ ಇದೆ. ಆದರೆ ಬೆಳಕಿಗೆ ಬರುವುದಿಲ್ಲ.ಪಾತ್ರೆಯೊಳಗಿಟ್ಟ ದೀಪದಂತೆ ಯಾರಿಗೂ ಗೊತ್ತಾಗಲಾರದು....
ಕೇಚಿದಾಕಾಶ ಸನ್ನಿಭಃ=ಇನ್ನೂ ಕೆಲವರಿಗೆ ಯಾರ ಪ್ರೋತ್ಸಾಹ ಇಲ್ಲದ್ದರೂ ಬೆಳಕಿಗೆ ಬರುತ್ತದೆ ಎನ್ನುತ್ತಾರೆ...
ಅರ್ಥ: ಕೆಲವು ಜನರ ಪ್ರತಿಭೆ ಗೊತ್ತಾಗಬೇಕಾದರೆ ಸ್ವಲ್ಪ ಪ್ರೋತ್ಸಾಹಿಸಬೇಕು.ಕೆಲವರಿಗೆ ಹೆಟ್ಟುವುದೇ ವ್ಯರ್ಥ.ಎಷ್ಟು ಪ್ರೋತ್ಸಾಹಿಸಿಯೂ ಪ್ರಯೋಜನ ಇಲ್ಲ.ಇನ್ನು ಕೆಲವರಿಗೆ ಪ್ರತಿಭೆ ಇದೆ. ಆದರೆ ಬೆಳಕಿಗೆ ಬರುವುದಿಲ್ಲ.ಪಾತ್ರೆಯೊಳಗಿಟ್ಟ ದೀಪದಂತೆ ಯಾರಿಗೂ ಗೊತ್ತಾಗಲಾರದು....ಇನ್ನೂ ಕೆಲವರಿಗೆ ಯಾರ ಪ್ರೋತ್ಸಾಹ ಇಲ್ಲದ್ದರೂ ಬೆಳಕಿಗೆ ಬರುತ್ತದೆ ಎನ್ನುತ್ತಾರೆ...
೨. ಪ್ರಾರಭ್ಯತೇ ನ ಖಲು ವಿಘ್ನ ಭಯೇನ ನೀಚೈಃ
ಪ್ರಾರಭ್ಯ ವಿಘ್ನ ವಿಹತಾ ವಿರಮಂತಿ ಮಧ್ಯಾಃ|
ವಿಘ್ನೈಃ ಪುನಃಪುನರಪಿ ಪ್ರತಿಹನ್ಯಮಾನಾಃ
ಪ್ರಾರಬ್ಧಮುತ್ತಮ ಜನಾಃ ನ ಪರಿತ್ಯಜಂತಿ||
ಇಲ್ಲಿ ಜನರನ್ನು ಅವರ ಛಲ,ಸಾಮರ್ಥ್ಯಕ್ಕೆ ಅನುಗುಣವಾಗಿ ಮೂರು ವರ್ಗಗಳಾಗಿ ವಿಭಾಗಿಸಿದ್ದಾರೆ.
ಮೊದಲಸಾಲಿನಲ್ಲಿ "ನೀಚೈಃ ವಿಘ್ನಭಯೇನ ನ ಖಲು ಪ್ರಾರಭ್ಯತೇ"=ನೀಚ ವರ್ಗದ ಜನ ಯಾವುದೇ ಕೆಲಸವನ್ನು ವಿಘ್ನಭಯದಿಂದ ಪ್ರಾರಂಭಿಸುವುದಿಲ್ಲ(ಇಲ್ಲಿ ನೀಚ ಎಂದರೆ ಜಾತಿಯಿಂದ ಅಥವಾ ಕೆಟ್ಟ ಎಂದರ್ಥವಲ್ಲ, ಹೇಡಿಗಳೆನ್ನಬಹುದು)
ಎರಡನೆ ಸಾಲಿನಲ್ಲಿ "ಮಧ್ಯಾಃ ಪ್ರಾರಭ್ಯ ವಿಘ್ನ ವಿಹತಾ ವಿರಮಂತಿ"=ಮಧ್ಯಮ ಸಾಮರ್ಥ್ಯದಜನರು ಕೆಲಸ ಆರಂಭಿಸಿ ಅಡ್ಡಿ ಬಂದ ಕೂಡಲೇ ನಿಲ್ಲಿಸುತ್ತಾರೆ ಎಂದಿದ್ದಾರೆ.
೩,೪ನೇ ಸಾಲಿನಲ್ಲಿ ಉತ್ತಮ ಸಾಮರ್ಥ್ಯದ ಜನರ ಕುರಿತು ಹೇಳಿದ್ದಾರೆ"ಪುನಃ ಪುನರಪಿ ವಿಘ್ನೈಃ ಪ್ರತಿಹನ್ಯಮಾನಾಃ ಉತ್ತಮ ಜನಾಃ ಪ್ರಾರಬ್ಧ ನ ಪರಿತ್ಯಜಂತಿ"=ನಿಜವಾದ ಸಾಮರ್ಥ್ಯವುಳ್ಳ ಜನರು ಪ್ರತಿ ಹಂತದಲ್ಲೂ ವಿಘ್ನ ಉಂಟಾದರೂ ಹಿಡಿದ ಕೆಲಸ ಪೂರೈಸದೇ ಬಿಡುವುದಿಲ್ಲ ಎನ್ನುತ್ತಾರೆ
(ಲಾಸ್ಯ:...ಅಂದ ಹಾಗೇ ನೀವು ಯಾವ ವರ್ಗಕ್ಕೆ ಸೇರಿದವರು.....?!!!)
೩.ಪರಿವರ್ತಿನಿ ಸಂಸಾರೇ ಮೃತಃ ಕೋ ವಾ ನ ಜಾಯತೇ|
ಸ ಜಾತೋ ಯೇನ ಜಾತೇನ ಯಾತಿ ವಂಶಃ ಸಮುನ್ನತಿಂ||
ಪರಿವರ್ತಿನಿ ಸಂಸಾರೇ=ತಿರುಗುತ್ತಿರುವ ಈಸಂಸಾರ ಚಕ್ರದಲ್ಲಿ
ಕೋ ನ ಮೃತ ವಾ ಜಾಯತೇ=ಯಾರು ಹುಟ್ಟುವುದಿಲ್ಲ?ಯಾರು ಸಾಯುವುದಿಲ್ಲ?
ಯೇನ ಜಾತೇನ ವಂಶಃ ಸಮುನ್ನತಿಂ ಯಾತಿ ಸ ಜಾತಃ=ಯಾರ ಹುಟ್ಟುವಿಕೆಯಿಂದ
ಅವನ ವಂಶದ ಕೀರ್ತಿ ಬೆಳಗುವುದೋ ಅವನೇ ನಿಜವಾಗಿ ಹುಟ್ಟಿದವನು.
(ಅಂದರೆ ಲೋಕ ಮೆಚ್ಚುವ ಕೆಲಸ ಮಾಡಿ ಕೀರ್ತಿ ಪಡೆದವನೆಂದರ್ಥ)ಅಂದರೆ
ಉದಾಹರೆಣೆಗೆ:
೧. ವಿನಾಯಕ ಸಾವರ್ಕರರ ಪ್ರತಿಭೆಯಿಂದಾಗಿ "ಒಹೋ ಇವ ದಾಮೋದರ ಸಾವರ್ಕರರ ಮಗನೋ?"
ಹೇಳಿ ಸಣ್ಣಾಗಿಪ್ಪಗ ಅವರ ನೆರೆಕರೆಯವು ಕೇಳಿದಂತೆ....
೨.ಅವರಿಂದಾಗಿ ನಾವಿಂದು "ಸಾವರ್ಕರ" ಎಂಬ ವಂಶದ ಹೆಸರು ತಿಳಿದಂತೆ...
೩.ಗೋಖಲೆ,ರಾನಡೆ,ಫಡ್ಕೆ,ಸಾವರ್ಕರ..ರಿಂದಾಗಿ "ಚಿತ್ಪಾವನ" ಎಂಬ ಶಬ್ದ ಬ್ರಿಟಿಷರನ್ನು ಕಾಡಿದಂತೆ...
೪."ಸಾವರ್ಕರಿಸಂ"ಎನ್ನುವುದು ಜನಹಿತ,ದೇಶದಹಿತ ಎಂದು ಮರಾಠೀಯರು ತಿಳಿಯಲು ಕಾರಣವಾದಂತೆ..
೫.ನಾವೆಲ್ಲಾ "ಮರಾಠೀಯ" ಹಾಗೂ "ಬಂಗಾಳೀಯ"ರನ್ನು(ಅಂದಿನ ಕಾಲದ...ಇಂದೂ ಕೂಡಾ..) ಅಪ್ರತಿಮ ದೇಶಭಕ್ತರೆಂದು ತಿಳಿಯಲು ಕಾರಣವಾದಂತೆ...
೬.ಅ)ದೇಶಕ್ಕೆ ದೇಶವೇ ನಿದ್ರಿಸುತ್ತಿದ್ದ ಕಾಲದಲ್ಲಿ...
ಆ)ಕಾಶಿಯ ಬ್ರಾಹ್ಮಣ ವಿದ್ವಾಂಸರು ಇಂಗ್ಲೆಂಡಿನ ೨ನೇ ಜಾರ್ಜ್ನನ್ನು ದೈವಾಂಶ ಸಂಭೂತನೆಂದು
ಸ್ವಸ್ತಿ ಮಂತ್ರಗಳಿಂದ ಅವನ ಸಾರೋಟನ್ನು ಎಳೆಯುತ್ತಿದ್ದ ಕಾಲದಲ್ಲಿ...!!!
ಇ)ನಾವೆಲ್ಲ ಹಾಡಿ ಹೊಗಳುವ ಗಾಂಧೀಜಿ ಇನ್ನೂ ಆಫ್ರಿಕಾದಲ್ಲಿ ಬ್ಯಾರಿಸ್ಟರಿಕೆ ಮಾಡುತ್ತಿದ್ದಾಗ...
ಫ್ರಾನ್ಸ್.ಯುರೋಪ್,ಜರ್ಮನಿ,..ಅಷ್ಟೇ ಏಕೆ ಅಮೆರಿಕದಲ್ಲಿ ಕೂಡಾ ಇಂಗ್ಲೆಂಡಿನಲ್ಲಿ ಸಾವರ್ಕರ್ ಬಂಧನವಾದಾಗ
ಅಪ್ರತಿಮ "ಭಾರತೀಯ" ದೇಶಭಕ್ತನೆಂದು ಸುದ್ದಿಯಾದಂತೆ...!!!
ಈ ರೀತಿಯಾಗಿ ವಂಶವೆಂಬುದು ೧ರಿಂದ ೬ರ ವರೆಗೆ "ಇನ್ವರ್ಟೆಡ್ ಕೊಮಾದೊಳಗೆ" ತನ್ನ ಅರ್ಥವನ್ನು ಅನೇಕ ರೀತಿಯಲ್ಲಿ ಬದಲುತ್ತದೆ.
(ಸಾವರ್ಕರರು ನನ್ನ ದೃಷ್ಟಿಯಲ್ಲಿ ಆದರ್ಶವಾಗಿರುವುದರಿಂದ ಹೀಗೆ ಬರೆದಿದ್ದೇನೆ.ಇಷ್ಟವಿಲ್ಲದವರು ಬೇರೆ ಉದಾಹರಣೆ ಊಹಿಸಿಕೊಳ್ಳಬಹುದು....)
೪.ಅನಾಗತ ವಿಧಾತಾ ಚ ಪ್ರತ್ಯುತ್ಪನ್ನ ಮತಿಶ್ಚಯಃ|
ದ್ವಾವೇವ ಸುಖಮೇಧೇತೇ ದೀರ್ಘಸೂತ್ರೀ ವಿನಶ್ಯತಿ||
ಅನಾಗತ ವಿಧಾತಾ ಚ=ಮುಂದೆ ಬರಲಿರುವ ಸಮಸ್ಯೆಯ ಪರಿಹಾರಕ್ಕೆ ಸಿದ್ಧತೆ ಮಾಡಿಕೊಂಡವನು
ಪ್ರತ್ಯುತ್ಪನ್ನ ಮತಿಶ್ಚಯಃ=ಸಮಯಕ್ಕೆ ಸರಿಯಾಗಿ ವಿವೇಕದಿಂದ ಬುದ್ಧಿಯೋಡಿಸುವವನು
ದ್ವಾವೇವ ಸುಖಮೇಧೇತೇ=ಈ ಎರಡು ವರ್ಗದವರು ಸುಖವನ್ನು(ಯಶಸ್ಸನ್ನು,ನೆಮ್ಮದಿಯನ್ನು)ಹೊಂದುತ್ತಾರೆ.
ದೀರ್ಘಸೂತ್ರೀ ವಿನಶ್ಯತಿ=ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗದವನು ನಾಶ ಹೊಂದುತ್ತಾರೆ...
ಯಾವತ್ತೂ ನಾವು ಕೆಲಸ ಮಾಡುವಾಗ ಅಥವಾ ಕೆಲವು ಪರಿಸ್ಥಿತಿಗಳಲ್ಲಿ ಸಮಸ್ಯೆ ಬರುವ ಮೊದಲೇ ಪರಿಹರಿಸಲು ಸಿದ್ಧತೆ ಮಾದಿಕೊಳ್ಳ ಬೇಕು ಅಥವಾ ತತ್ ಕ್ಷಣ ಪ್ರತಿಕ್ರಿಯಿಸಿ ಪ್ರತಿವಿಧಿ ರೂಪಿಸಬೇಕು ವಿಳಂಬ ಮಾಡಿದರೆ ಯಾವುದೇ ಕೆಲಸವನ್ನು ಸಾಧಿಸಲು ಸಾಧ್ಯವಿಲ್ಲ ಎಂಬುದು ಇದರರ್ಥ..
೫.ಖಿನ್ನಂ ಚಾಪಿ ಸುಭಾಷಿತೇನ ರಮತೇ ಸ್ವೀಯಂ ಮನಃಸರ್ವದಾ
ಶ್ರುತ್ವಾನ್ಯಸ್ಯ ಸುಭಾಷಿತಂ ಖಲು ಮನಃ ಶ್ರೋತುಂ ಪುನರ್ವಾಂಛತಿ|
ಅಜ್ಞಾನ್ ಜ್ಞಾನವತೋsಪ್ಯನೇನ ಹಿ ವಶೀಕರ್ತುಂ ಸಮರ್ಥೋ ಭವೇತ್
ಕರ್ತವ್ಯೋ ಹಿ ಸುಭಾಷಿತಸ್ಯ ಮನುಜೈರಾವಶ್ಯಕಃ ಸಂಗ್ರಹಃ||
ಸರ್ವದಾ ಖಿನ್ನಂ ಮನಃ ಚ ಅಪಿ=ದುಃಖಭರಿತ ಮನಸ್ಸು ಕೂಡಾ,
ಸುಭಾಷಿತೇನ ಸ್ವೀಯಂ ರಮತೇ=ಒಳ್ಳೆಯ ಮಾತನ್ನು(ಸುಭಾಷಿತ) ಕೇಳಿ ಮುದಗೊಳ್ಳುತ್ತದೆ.
ಅನ್ಯಸ್ಯ ಸುಭಾಷಿತಂ ಶ್ರುತ್ವಾ=ಬೇರೆಯವರು ಹೇಳಿದ ಸುಭಾಷಿತವನ್ನು ಕೇಳಿ,
ಮನಃ ಖಲು ಪುನಃ ಶ್ರೋತುಂ ವಾಂಛತಿ=ಮನಸ್ಸು ಮತ್ತೆ ಕೇಳಬೇಕೆಂದು ಹಂಬಲಿಸುತ್ತದೆ.
ಅಜ್ಞಾನ್ ಜ್ಞಾನವತಃ ಅಪಿ=ತಿಳಿಗೇಡಿಯಾದರೂ ಪಂಡಿತನೇ ಆದರೂ,
ಅನೇನ ಹಿ ವಶೀಕರ್ತುಂ ಸಮರ್ಥೋ ಭವೇತ್=ಸುಭಾಷಿತಗಳಿಂದ ವಶೀಕರಿಸಲು (ವಿಶ್ವಾಸಗಳಿಸಿಕೊಳ್ಳಲು) ಸಾಧ್ಯ.
ಮನುಜೈಃ ಸುಭಾಷಿತಸ್ಯ ಸಂಗ್ರಹಃ ಆವಶ್ಯಕಃ ಕರ್ತವ್ಯೋ ಹಿ=ಆದ್ದರಿಂದ ಮನುಷ್ಯರು ಸುಭಾಷಿತ ಸಂಗ್ರಹವನ್ನು ಕರ್ತವ್ಯದಂತೆ ಮಾಡಬೇಕು
ದುಃಖಭರಿತ ಮನಸ್ಸು ಕೂಡಾ ಒಳ್ಳೆಯ ಮಾತನ್ನು(ಸುಭಾಷಿತ) ಕೇಳಿ ಮುದಗೊಳ್ಳುತ್ತದೆ.ಬೇರೆಯವರು ಹೇಳಿದ ಸುಭಾಷಿತವನ್ನು ಕೇಳಿ ಮನಸ್ಸು ಮತ್ತೆ ಕೇಳಬೇಕೆಂದು ಹಂಬಲಿಸುತ್ತದೆ.ತಿಳಿಗೇಡಿಯಾದರೂ ಪಂಡಿತನೇ ಆದರೂ ಅವರನ್ನು ಸುಭಾಷಿತಗಳಿಂದ ವಶೀಕರಿಸಲು (ವಿಶ್ವಾಸಗಳಿಸಿಕೊಳ್ಳಲು) ಸಾಧ್ಯವಿದೆ.ಆದ್ದರಿಂದ ಮನುಷ್ಯರು ಸುಭಾಷಿತ ಸಂಗ್ರಹವನ್ನು ಕರ್ತವ್ಯದಂತೆ ಮಾಡಬೇಕು ಎನ್ನುತ್ತಾರೆ..
No comments:
Post a Comment